ಅವಳಿಗೆ ಆಗಷ್ಟೇ ಎರಡು ವರ್ಷ ತುಂಬಿತ್ತು. ಅವಳ ಜ್ವರ ಇಳಿಯುತ್ತಿರಲಿಲ್ಲ; ಹಾಗೂ ಮೂರ್ಛೆ ರೋಗದ ಸೆಳವು ಪ್ರಾರಂಭವಾದಾಗ, ಸ್ಥಳೀಯ ವೈದ್ಯರು, ಒಂದು ಸಣ್ಣ ಹಳ್ಳಿಯ ಬುಡಕಟ್ಟಿನವರಾದ ಅವಳ ತಾಯಿತಂದೆಯರಿಗೆ, ತಾವಿನ್ನು ಅವಳಿಗೆ ಚಿಕಿತ್ಸೆ ಮಾಡಲು ಸಾಧ್ಯವಿಲ್ಲ ಎಂದರು.
ಆಗ ಅವರು ಎದುರಿಸಿದ ಕಠಿಣ ಪರೀಕ್ಷೆ ಪ್ರಾರಂಭವಾಯಿತು. ಒಂದು ದೊಡ್ಡ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐ ಸಿ ಯು) ಒಂದು ವಾರ ಇರಿಸಿಕೊಂಡ ನಂತರ, ಕೃತಕ ಉಸಿರಾಟದ ಯಂತ್ರವನ್ನು ಹೊಂದಿದ್ದಂತಹ ಹಾಸಿಗೆಗಳು ಇಲ್ಲ ಎನ್ನುವ ಕಾರಣಕ್ಕಾಗಿ ಅವಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಆಗ ಒಂದು ಖಾಸಗಿ ಆಸ್ಪತ್ರೆಯು ಮಗುವನ್ನು ದಾಖಲಿಸಿಕೊಳ್ಳಲು ಒಪ್ಪಿಕೊಂಡಿತು, ಅಲ್ಲಿ ಇನ್ನೆರಡು ವಾರಗಳ ಕಾಲ ಐ ಸಿ ಯು ನಲ್ಲಿ ಇರಿಸಿಕೊಂಡ ಬಳಿಕ, ಅಲ್ಲಿಯ ವೈದ್ಯರೂ ಸಹ ಕೈ ಚೆಲ್ಲಿದರು. ನಂತರ ಅವರು ಮೂರನೆಯ ಆಸ್ಪತ್ರೆಗೆ ಹೋದಾಗ, ಅಲ್ಲಿ ಮಿದುಳಿನ ಶಸ್ತ್ರಚಿಕಿತ್ಸೆ ಮಾಡಿ, ಮತ್ತೆರಡು ವಾರ ಐ ಸಿ ಯು ನಲ್ಲಿ ಇರಿಸಿಕೊಂಡ ಮೇಲೆ, ಮಗು ಅಂತಿಮವಾಗಿ ತೀರಿಕೊಂಡಿತು.
ಈ ಮಗುವಿನ ಪರಿಸ್ಥಿತಿಯನ್ನು ಊಹಿಸಿಕೊಳ್ಳಿ, ವಾರಗಳಗಟ್ಟಲೆ ಅವಳು ಐ ಸಿ ಯು ನಲ್ಲಿ ಇದ್ದದ್ದು, ಔಷಧಿಗಳು, ಕೊಳವೆಗಳೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದದ್ದು. ಅವಳ ತಾಯಿ ತಂದೆಯರ ಪರಿಸ್ಥಿತಿಯನ್ನು ಊಹಿಸಿಕೊಳ್ಳಿ, ತಮ್ಮ ಬುಡಕಟ್ಟಿನ ಹಳ್ಳಿಯಿಂದ ನಗರಕ್ಕೆ ಧಾವಿಸಿದ್ದು, ಮಗು ಕೊನೆಯುಸಿರೆಳೆಯುತ್ತಿರುವ ಕಡೆಯ ದಿನಗಳಲ್ಲಿ ಮಗುವನ್ನು ತಮ್ಮ ತೋಳುಗಳಲ್ಲಿ ಹಿಡಿದಿಟ್ಟುಕೊಳ್ಳಲಾಗದಿದ್ದುದು, ಔಷಧಿಗಳ ಖರ್ಚಿಗಾಗಿ ಯಾವಾಗಲೂ ಹಣಕ್ಕಾಗಿ ಹರಸಾಹಸ ಮಾಡಿದ್ದು ಹಾಗೂ ಕೊನೆಯಲ್ಲಿ ಮಗುವನ್ನು ಕಳೆದುಕೊಂಡು ಜೀವನಪರ್ಯಂತ ಸಾಲದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿದ್ದು.
ಈ ಮಗುವಿನ ಪ್ರಕರಣವು ಆಸ್ಪತ್ರೆಗಳ ಅಸಮರ್ಪಕತೆ ಹಾಗೂ ನಿರ್ಲಕ್ಷ್ಯವನ್ನು ಪ್ರತಿನಿಧಿಸುತ್ತದೆ ಎನ್ನುವುದು ನಮ್ಮ ಆರಂಭದ ತಿಳುವಳಿಕೆಯಾಗಿತ್ತು. ಆದರೆ ನಾವು ವಿಷಯದ ಆಳಕ್ಕೆ ಇಳಿಯುತ್ತಿದ್ದಂತೆ, ಈ ದುರಂತಕ್ಕೆ ಕಾರಣವಾದ ಮೂಲಭೂತ ವೈಫಲ್ಯಗಳು ಮೊದಲಿನಿಂದಲೇ ನಡೆದು ಬಂದಿದ್ದವು ಎಂಬುದು ನಮಗೆ ಮನದಟ್ಟಾಯಿತು.
ಮಗುವನ್ನು ಕಾಡಿದ್ದು ಕ್ಷಯರೋಗ ಜನ್ಯ ಮೆದುಳೂತ, ಎಂದರೆ ಕ್ಷಯರೋಗವು ಮೆದುಳನ್ನು ತಲುಪಿರುವ ಸ್ಥಿತಿ. ಎಳೆಯ ಮಕ್ಕಳಲ್ಲಿ ಈ ರೋಗನಿರ್ಣಯವನ್ನು ಮಾಡುವುದು ತಡವಾದರೆ ಅದು ಮಾರಣಾಂತಿಕವಾಗುತ್ತದೆ. ಅವಳು ದೀರ್ಘಕಾಲದಿಂದ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದಳು, ದುರ್ಬಲಳಾಗಿದ್ದಳು ಹಾಗೂ ಅಪೌಷ್ಟಿಕತೆಯಿಂದ ನರಳುತ್ತಿದ್ದಳು. ಅವಳ ತಾಯಿಯು ಗರ್ಭಿಣಿಯಾಗಿದ್ದಾಗ ರಕ್ತಹೀನತೆಯ ಸಮಸ್ಯೆಯನ್ನು ಹೊಂದಿರದಿದ್ದರೆ, ಅವಳು ಹುಟ್ಟುವಾಗ ಆರೋಗ್ಯಕರವಾದ ತೂಕವನ್ನು ಹೊಂದಿದ್ದರೆ, ಸಮರ್ಪಕವಾಗಿ ಪೌಷ್ಟಿಕ ಆಹಾರವನ್ನು ಪಡೆದುಕೊಂಡಿದ್ದರೆ, ಅವಳ ಕಾಯಿಲೆಯ ಲಕ್ಷಣಗಳನ್ನು ಬೇಗನೆ ಗುರುತಿಸಿ ಸರಿಯಾದ ಚಿಕಿತ್ಸೆ ನೀಡಿದ್ದರೆ, ಅವಳು ಆಸ್ಪತ್ರೆಯನ್ನು ಪ್ರವೇಶಿಸುವ ಅಗತ್ಯವೇ ಬರುತ್ತಿರಲಿಲ್ಲವೇನೋ.
ಇಂತಹ ಘಟನೆಗಳಿಂದ ನೊಂದು, ಕೆಲವು ವರ್ಷಗಳ ಹಿಂದೆ, ನಾವು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂದು ತೀರ್ಮಾನಿಸಿದೆವು. ಒಳ್ಳೆಯ ಆರೋಗ್ಯವು ನಮ್ಮ ಜನರ ಯೋಗಕ್ಷೇಮಕ್ಕೆ ನಿರ್ಣಾಯಕ ಎಂದು ನಾವು ನಂಬುತ್ತೇವೆ. ಪ್ರತಿಯೊಬ್ಬ ವ್ಯಕ್ತಿಗೂ ಉತ್ತಮ ಆರೋಗ್ಯವನ್ನು ಹೊಂದುವ ಹಕ್ಕು ಇದೆ, ಅದರ ಅತ್ಯಂತ ಮುಖ್ಯವಾದ ಅಂಶಗಳೆಂದರೆ ಶಿಕ್ಷಣ, ರೋಗ ಪ್ರತಿಬಂಧಕ ಕ್ರಮಗಳು (ಸುರಕ್ಷಿತ ಗರ್ಭಧಾರಣೆ, ಪೌಷ್ಟಿಕತೆ, ನೈರ್ಮಲ್ಯ, ಲಸಿಕೆಗಳನ್ನು ಹಾಕಿಸಿಕೊಳ್ಳುವುದು, ಮುಂತಾದವು) ಖಾಯಿಲೆಗಳನ್ನು ಬೇಗನೆ ತಪಾಸಣೆ ಮಾಡುವುದು ಹಾಗೂ ಪ್ರಾಥಮಿಕ ಆರೋಗ್ಯ ಸೇವೆಯ ಲಭ್ಯತೆ.
ಸಾರ್ವಜನಿಕ (ಸರ್ಕಾರಿ) ಆರೋಗ್ಯ ವ್ಯವಸ್ಥೆಯು ಈ ಮಾದರಿಯನ್ನು ಅನುಸರಿಸುತ್ತದೆ – ಆಶಾ ಕಾರ್ಯಕರ್ತೆಯರ ಮುಂಚೂಣಿ ತಂಡ (ಸಮುದಾಯ ಆರೋಗ್ಯ ಕಾರ್ಯಕರ್ತರು), ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಎ ಎನ್ ಎಂ ಗಳು (ಶುಶ್ರೂಷಕಿಯರು), ಹಳ್ಳಿಗಳಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುತ್ತಾರೆ; ನಂತರ ಆರೋಗ್ಯ ಉಪ- ಕೇಂದ್ರಗಳು ಹಾಗೂ ಪ್ರಾಥಮಿಕ ಕೇಂದ್ರಗಳಿಂದ ತಾಲೂಕು ಮಟ್ಟದ (ಬ್ಲಾಕ್) ಹಾಗೂ ಜಿಲ್ಲಾ ಮಟ್ಟದ ಆಸ್ಪತ್ರೆಗಳು, ಹೀಗೆ ಕ್ರಮೇಣವಾಗಿ ವಿಸ್ತರಿಸಿಕೊಳ್ಳುವ ಒಂದು ಸಂರಚನೆ ಕಂಡು ಬರುತ್ತದೆ.

ಈ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಿದಾಗ, ಅದು ಗಮನಾರ್ಹವಾದ ಪರಿಣಾಮಗಳನ್ನುಂಟು ಮಾಡುತ್ತದೆ. ಇದೇ ವಾರದಲ್ಲಿ ನಾನು ಅಂತಹ ಒಂದು ಉದಾಹರಣೆಯನ್ನು ಗಮನಿಸಿದೆ - ದೇಶದ ಮಧ್ಯಭಾಗದ ಒಂದು ಬುಡಕಟ್ಟಿನ ಬ್ಲಾಕ್ ನಲ್ಲಿ ರೋಗ ನಿರೋಧಕ ಲಸಿಕೆಗಳ ವೇಳಾಪಟ್ಟಿಯನ್ನು ತಪ್ಪಿಸಿಕೊಂಡಿದ್ದ ಒಂದೇ ಒಂದು ಮಗುವನ್ನು ಕಾಣುವುದು ಸಾಧ್ಯವಾಗಲಿಲ್ಲ. ನಮ್ಮ ದೇಶದ ವ್ಯಾಪಕತೆ ಹಾಗೂ ಸಂಕೀರ್ಣತೆಗಳನ್ನು ಪರಿಗಣಿಸಿದರೆ, ಇದು ನಂಬುವುದಕ್ಕೆ ಅಸಾಧ್ಯ ಎನ್ನುವಂತಿದೆ.
ಇದನ್ನು ಒಂದು ಅಂಕಣ ಬರಹವನ್ನಾಗಿಸಿದರೆ, ನಾನು ಹಳ್ಳಿಗಳಿಂದ, ನಗರದ ಅನೌಪಚಾರಿಕ ವಸತಿ ಪ್ರದೇಶಗಳಿಂದ ಹಿಡಿದು ದೂರದ ಬುಡಕಟ್ಟು ಪ್ರದೇಶಗಳವರೆಗೂ ಎಲ್ಲೆಡೆಯಿಂದ ಇಂತಹ ಕಥೆಗಳನ್ನು ತಂದು ತೋರಿಸಬಲ್ಲೆ, ಅವು ಭಾರತದ ಸಾರ್ವಜನಿಕ ಆರೋಗ್ಯದ ಸವಾಲುಗಳನ್ನು, ಯಶಸ್ಸುಗಳನ್ನು ಹಾಗೂ ಸಂಕೀರ್ಣತೆಗಳನ್ನು ಸ್ಪಷ್ಟಪಡಿಸುತ್ತವೆ. ಆದರೆ, ಈ ವಿಷಯದಲ್ಲಿ ನಾವು ಹೆಚ್ಚು ಆಳವಾಗಿ ಪ್ರವೇಶಿಸುತ್ತಿದ್ದಂತೆ, ನನ್ನ ತೀರ್ಮಾನಗಳನ್ನು ಓದುಗರ ಮುಂದೆ ಸ್ಪಷ್ಟಪಡಿಸಲು ಬಯಸುತ್ತೇನೆ:
ಒಳ್ಳೆಯ ಆರೋಗ್ಯವು ನಮ್ಮ ಜನರ ಯೋಗಕ್ಷೇಮಕ್ಕೆ ನಿರ್ಣಾಯಕ ಎಂದು ನಾವು ನಂಬುತ್ತೇವೆ.
ಖಾಸಗಿ ಆಸ್ಪತ್ರೆಗಳಿಗೆ ಏಕೆ ಮಿತಿಮೀರಿದ ಪ್ರಾಶಸ್ತ್ಯ ನೀಡಲಾಗಿದೆ
ಇಂದಿನ ಸುದ್ಧಿ ಪತ್ರಿಕೆಯು ನನ್ನ ನಗರದ ಒಂದು ಪ್ರಮುಖ ಖಾಸಗಿ ಆಸ್ಪತ್ರೆಯಲ್ಲಿ ಒಂದು ಅಪರೂಪದ ಮಕ್ಕಳ ಹೃದ್ರೋಗ ಚಿಕಿತ್ಸೆಗೆ ಬಳಸಿದ ಅತ್ಯಾಧುನಿಕ ರೋಬೊಟಿಕ್ ಶಸ್ತ್ರಚಿಕಿತ್ಸೆಯ ಕುರಿತು ವರದಿ ಮಾಡಿದೆ; ಮುಂದುವರೆದು ಆ ವರದಿಯು, ಭಾರತವು ಹೇಗೆ ವೈದ್ಯಕೀಯ ಪ್ರವಾಸೋದ್ಯಮದ ತಾಣವಾಗಿ ಅಭಿವೃದ್ದಿಯಾಗುತ್ತಿದೆ ಎಂದು ವಿವರಿಸುತ್ತದೆ. ಮುಖ್ಯವಾಹಿನಿಗಳಲ್ಲಿ ನಡೆಯುವ ಬಹಳಷ್ಟು ಚರ್ಚೆಗಳು ಆಸ್ಪತ್ರೆಗಳ ಸುತ್ತಲೂ, ಅದರಲ್ಲೂ ಖಾಸಗಿ ವ್ಯಾಪಾರಿ ಆಸ್ಪತ್ರೆಗಳ ಸುತ್ತಲೂ ನಡೆಯುತ್ತಿರುತ್ತವೆ.
ಇದನ್ನು ಒಂದು ಅಂಕಣ ಬರಹವನ್ನಾಗಿಸಿದರೆ, ನಾನು ಹಳ್ಳಿಗಳಿಂದ, ನಗರದ ಅನೌಪಚಾರಿಕ ವಸತಿ ಪ್ರದೇಶಗಳಿಂದ ಹಿಡಿದು ದೂರದ ಬುಡಕಟ್ಟು ಪ್ರದೇಶಗಳವರೆಗೂ ಎಲ್ಲೆಡೆಯಿಂದ
ಎರಡು ಕಾರಣಗಳಿಂದಾಗಿ ಇದು ಅನುಚಿತವಾದದ್ದು: ಮೊದಲನೆಯದು, ಆಸ್ಪತ್ರೆಗಳು ಅಮುಖ್ಯವಲ್ಲವಾದರೂ, ಕೆಲಸದ ದೊಡ್ಡ ಭಾಗ ನಡೆಯುವುದು ಆರೋಗ್ಯ ಸೇವೆಯ ಮುಂಚೂಣಿಯಲ್ಲಿ. ಎರಡನೆಯದು, ಆರೋಗ್ಯವು ಸಾರ್ವಜನಿಕ ಒಳಿತಿನ ವಿಷಯ; ವ್ಯಾಪಾರದ ಉದ್ದೇಶ ಹೊಂದಿರುವ ಆರೋಗ್ಯ ಸೇವೆ ಒದಗಿಸುವ ಸಂಸ್ಥೆಗಳು, ತಮ್ಮ ಮೂಲ ಉದ್ದೇಶದಿಂದಾಗಿಯೇ, ತಾವು ಒದಗಿಸುವ ಸೇವೆಗಳ ದುಬಾರಿ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲದ ದುರ್ಬಲ ಸಮುದಾಯಗಳ ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸುವುದಿಲ್ಲ.
ಆದ್ದರಿಂದಲೇ ನಮ್ಮ ದೇಶದ ಅತ್ಯಂತ ಮುಖ್ಯವಾದ ಆರೋಗ್ಯದ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಖಾಸಗಿ ಆಸ್ಪತ್ರೆಗಳಿಗೆ, ಅಬ್ಬಬ್ಬಾ ಎಂದರೆ, ಒಂದು ಸಣ್ಣ ಪಾತ್ರವಿದೆಯಷ್ಟೇ.
ಆದ್ದರಿಂದಲೇ ನಮ್ಮ ದೇಶದ ಅತ್ಯಂತ ಮುಖ್ಯವಾದ ಆರೋಗ್ಯದ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಖಾಸಗಿ ಆಸ್ಪತ್ರೆಗಳಿಗೆ, ಅಬ್ಬಬ್ಬಾ ಎಂದರೆ, ಒಂದು ಸಣ್ಣ ಪಾತ್ರವಿದೆಯಷ್ಟೇ.
ಸೇವಾ ವೃತ್ತಿಗಳು
ಆರೋಗ್ಯ ಕ್ಷೇತ್ರದಲ್ಲಿರುವ ಬಹಳ ದೊಡ್ಡ ಸಮಸ್ಯೆಗಳಲ್ಲಿ ಒಂದೆಂದರೆ, ಎಲ್ಲಿ ಅತ್ಯಂತ ಅವಶ್ಯಕ ಅಲ್ಲಿ ಆರೋಗ್ಯ ಸೇವಾ ವೃತ್ತಿನಿರತರು ಸಾಕಷ್ಟು ಸಂಖ್ಯೆಯಲ್ಲಿ ಸಿಗದಿರುವುದು.
ಮುಖ್ಯವಾಹಿನಿಗಳಲ್ಲಿ ನಡೆಯುವ ಬಹಳಷ್ಟು ಚರ್ಚೆಗಳು ಆಸ್ಪತ್ರೆಗಳ ಸುತ್ತಲೂ, ಅದರಲ್ಲೂ ಖಾಸಗಿ ವ್ಯಾಪಾರಿ ಆಸ್ಪತ್ರೆಗಳ ಸುತ್ತಲೂ ನಡೆಯುತ್ತಿರುತ್ತವೆ.
ಕೆಲವು ವೃತ್ತಿಗಳು ಮೂಲತಃ ಸೇವಾ ವೃತ್ತಿಗಳು – ಉದಾಹರಣೆಗೆ ಶಿಕ್ಷಕರು, ವಕೀಲರು, ವೈದ್ಯರು. ಬಹಳಷ್ಟು ಜನರಿಗೆ ವೈದ್ಯಕೀಯ ಸೇವೆಯು ಲಾಭದಾಯಕ ವೃತ್ತಿಯಾಗಿ ಪರಿಣಮಿಸಿರುವುದು ದುರದೃಷ್ಟದ ಸಂಗತಿಯಾಗಿದೆ. ಹಣಕ್ಕೋಸ್ಕರ ನಡೆಸುವ ವೈದ್ಯಕೀಯ ಕಾಲೇಜುಗಳು ಹಾಗೂ ಖಾಸಗಿ ಅಸ್ಪತ್ರೆಗಳಲ್ಲಿ ಈ ವಿದ್ಯಮಾನದ ವ್ಯಾಪಾರಿ ಬೇರುಗಳಿರುವುದನ್ನು ನೇರವಾಗಿ ಗುರುತಿಸಬಹುದು.

ಭಾರತದ ವೈದ್ಯಕೀಯ ಶಿಕ್ಷಣ ಕ್ಷೇತ್ರವನ್ನು ಅದರ ವ್ಯಾಪಾರೋದ್ದೇಶದಿಂದ ವಿಮುಖವಾಗಿಸಿ, ಅದರಲ್ಲಿ ಸೇವೆ ಮತ್ತು ಮೌಲ್ಯಗಳ ನೈತಿಕತೆಯನ್ನು ಸೃಷ್ಟಿಸಲು ಒಂದು ಕ್ರಾಂತಿಯೇ ನಡೆಯಬೇಕಾಗಿದೆ.
ನಗರ ಪ್ರದೇಶಗಳಲ್ಲಿ ಉಂಟಾಗುತ್ತಿರುವ ಕಂದರಗಳು
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿರುವ ಸಮಸ್ಯೆಗಳನ್ನು ನೋಡಲು ನೀವು ಬಹಳ ದೂರದ ಪ್ರದೇಶಗಳಿಗೆ ಹೋಗಬೇಕಾಗಿಲ್ಲ. ಜೀವನೋಪಾಯ ನಿರ್ವಹಣೆಗಾಗಿ ತಮ್ಮ ಊರು, ಮನೆಗಳನ್ನು ತೊರೆದು, ಕಟ್ಟಡ ಕಾರ್ಮಿಕರಾಗಿ, ಭದ್ರತಾ ಸಿಬ್ಬಂದಿಗಳಾಗಿ, ಮನೆಗೆಲಸ ಮಾಡುವವರಾಗಿ ಹಾಗೂ ಗಿಗ್ ಕಾರ್ಮಿಕರಾಗಿ ದುಡಿಯುತ್ತಿರುವ, ದೇಶದೆಲ್ಲೆಡೆಗಳಿಂದ ಬರುತ್ತಿರುವ ವಲಸೆ ಗಾರರ ಅನೌಪಚಾರಿಕ ದುಡಿಮೆಯ ಮೇಲೆ ನಮ್ಮ ಮಹಾನಗರಗಳು ಬದುಕುಳಿದಿವೆ.
ಅವರುಗಳಿಂದ ನಮ್ಮ ನಗರಗಳು ಕೆಲಸ ಮಾಡುತ್ತಿದ್ದರೂ, ಅವರು ಅಂಗನವಾಡಿಗಳು, ಪಡಿತರ ಅಂಗಡಿಗಳು ಅಥವಾ ಆರೋಗ್ಯ ಕೇಂದ್ರಗಳಂತಹ ಸಾಮಾನ್ಯವಾದ ಸೇವೆಗಳನ್ನು ಪಡೆದುಕೊಳ್ಳಲು ಇರುವ ಅವಕಾಶಗಳು ಬಹಳ ಕಡಿಮೆ.
ಉಪಯುಕ್ತವಾದ ಹೊಸ ಶೋಧನೆಗಳು
ಭಾರತದ ವೈದ್ಯಕೀಯ ಶಿಕ್ಷಣ ಕ್ಷೇತ್ರವನ್ನು ಅದರ ವ್ಯಾಪಾರೋದ್ದೇಶದಿಂದ ವಿಮುಖವಾಗಿಸಿ, ಅದರಲ್ಲಿ ಸೇವೆ ಮತ್ತು ಮೌಲ್ಯಗಳ ನೈತಿಕತೆಯನ್ನು ಸೃಷ್ಟಿಸಲು ಒಂದು ಕ್ರಾಂತಿಯೇ ನಡೆಯಬೇಕಾಗಿದೆ.
ಆರೋಗ್ಯ ಕ್ಷೇತ್ರದಲ್ಲಿ ತಾಂತ್ರಿಕ ಅಭಿವೃದ್ಧಿ ಎಂಬುದು ಬಹಳ ಆಕರ್ಷಕ ವಿಷಯವಾಗಿದೆ; ಅವು, ದೂರ ನಿಯಂತ್ರಣದ ಅನ್ವಯಿಕೆಗಳು, ರೋಬೊಟ್ ಗಳು, ಜೀನ್ ಥೆರಪಿಗಳು (ಅನುವಂಶಿಕ ಅಸ್ವಸ್ಥತೆಗಳಿಗೆ ಚಿಕಿತ್ಸೆ), ಕೃತಕ ಬುದ್ಧಿಮತ್ತೆ (ಎಐ) ಮುಂತಾದವುಗಳು. ಆದರೆ ಅತ್ಯಂತ ಮುಖ್ಯವಾದ ಹೊಸ ಶೋಧನೆಗಳು ತಾಂತ್ರಿಕತೆಗೆ ಸಂಬಂಧಿಸಿದ್ದಲ್ಲ. ಆಶಾಗಳ ಉದಾಹರಣೆಯನ್ನೇ ತೆಗೆದುಕೊಳ್ಳಿ; ಗ್ರಾಮೀಣ ಸಮುದಾಯಗಳಿಂದ ನೇಮಕ ಮಾಡಿಕೊಳ್ಳಲಾಗಿರುವ ಇವರು ಸಮುದಾಯ ಆರೋಗ್ಯ ಸೇವೆಯನ್ನು ದೇಶದ ಮೂಲೆಮೂಲೆಗೂ ತೆಗೆದುಕೊಂಡು ಹೋಗುವ ಮುಂಚೂಣಿ ಆರೋಗ್ಯ ಕಾರ್ಯಕರ್ತರು.
ಭಾರತವು ಮಾಡಿರುವಂತಹ ಅತ್ಯಂತ ದೊಡ್ಡ ಸಾಧನೆಗಳಲ್ಲಿ ಅನೇಕ ಅಂಶಗಳು – ಉದಾಹರಣೆಗೆ ಆಸ್ಪತ್ರೆಯೊಳಗಿನ ಹೆರಿಗೆಗಳ ಹೆಚ್ಚಳ ಹಾಗೂ ಶಿಶುಮರಣ ಹಾಗೂ ತಾಯಂದಿರ ಮರಣ ಪ್ರಮಾಣಗಳಲ್ಲಿ ಕಂಡುಬಂದಿರುವ ಭಾರಿ ಇಳಿಕೆ – ಇವು ಸಾಧ್ಯವಾದದ್ದು ದೇಶದ ಮೂಲೆಮೂಲೆಗಳಲ್ಲಿ ಆಶಾಗಳು ಪರಿಶ್ರಮದಾಯಕವಾದ, ಪ್ರತಿ ಮನೆಗೂ ನೀಡಿರುವ ಭೇಟಿಯಿಂದ.
ಅತಿ ಕಡಿಮೆ ಸಾರ್ವಜನಿಕ ವೆಚ್ಚ
ಸಾರ್ವಜನಿಕ ಆರೋಗ್ಯ ವಿತರಣೆಯಲ್ಲಿ ಆಶಾಗಳ ಪಾತ್ರ ಎಷ್ಟು ನಿರ್ಣಾಯಕವಾದದ್ದು ಎಂಬುದನ್ನು ಪರಿಗಣಿಸಿದಾಗ, ಅವರ ಈ ಕೆಲಸಕ್ಕೆ ಸಿಗುವ ಸಂಭಾವನೆ ಎಷ್ಟು ಕಡಿಮೆ ಎಂದು ನೀವು ಆಶ್ಚರ್ಯಚಕಿತರಾಗುತ್ತೀರಿ. ಜಾಗತಿಕವಾಗಿ ಭಾರತವು ಆರೋಗ್ಯದ ಮೇಲೆ ಅತಿ ಕಡಿಮೆ ತಲಾವಾರು ಸಾರ್ವಜನಿಕ ವೆಚ್ಚ ಮಾಡುವ ದೇಶಗಳಲ್ಲಿ ಒಂದು; ಇನ್ನಿತರ ಅಭಿವೃದ್ಧಿಶೀಲ ದೇಶಗಳಿಗೆ ಹೋಲಿಸಿದರೂ ಸಹ ಇದು ಕಡಿಮೆಯೇ. ಇದು ಸಾರ್ವಜನಿಕ ಆರೋಗ್ಯ ವಿತರಣಾ ವ್ಯವಸ್ಥೆಯ ಮೇಲೆ ನೇರವಾದ ಪರಿಣಾಮವನ್ನು ಹೊಂದಿರುತ್ತದೆ.
Subscribe to stay connected
We will send you a monthly newsletter listing all the articles that were published in the month.
ನನ್ನ ಸಾಮಾನ್ಯ ದೃಷ್ಟಿಕೋನ ಏನು ಎನ್ನುವುದು ಇಷ್ಟು ಹೊತ್ತಿಗಾಗಲೇ ಸ್ಪಷ್ಟವಾಗಿರುತ್ತದೆ. ಅದರೊಂದಿಗೆ, ನಮ್ಮ ಕಥೆಯನ್ನು ಯಾವ ಹುಡುಗಿಯ ವೃತ್ತಾಂತದಿಂದ ಪ್ರಾರಂಭಿಸಿದೆವೋ ಅಲ್ಲಿಗೆ ಹೋಗಲು ನಾನು ಇಚ್ಚಿಸುತ್ತೇನೆ. ಮೊದಲನೆಯ ಹೆಜ್ಜೆ ಎಂದರೆ, ಅವಳು ಅನುಭವಿಸಿದ ಸಂಕಟವನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎನ್ನುವುದನ್ನು ಗುರುತಿಸುವುದು; ಇದು ನಮ್ಮ ಜನಗಳ ಪಾಲಿನ ವಾಸ್ತವವಾಗುವುದು ಸಾಧ್ಯವಿಲ್ಲ. ಮುಂದಿನ ಹೆಜ್ಜೆ ಎಂದರೆ, ಈ ಪರಿಸ್ಥಿತಿಯನ್ನು ಬಗೆಹರಿಸಬೇಕೆಂದರೆ ಒಂದು ಸದೃಢವಾದ ಮುಂಚೂಣಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಅವಶ್ಯಕತೆ ಇದೆ ಎಂದು ಗುರುತಿಸುವುದು.
ಒಂದು ದೇಶವಾಗಿ ನಾವು ಗಣನೀಯವಾದ ಸಾಧನೆಗಳನ್ನು ಮಾಡಿದ್ದರೂ ಸಹ, ಇನ್ನೂ ನಮ್ಮ ದೃಷ್ಟಿಕೋನದಲ್ಲಿ ಹಾಗೂ ಆರೋಗ್ಯ ವಿತರಣೆಯಲ್ಲಿ ಗಾಬರಿ ಹುಟ್ಟಿಸುವಷ್ಟು ಕಂದರಗಳಿವೆ. ಅವಳ ಕಥೆಯು ಮರುಕಳಿಸಬಾರದು ಎಂದರೆ, ಆಗ ಭಾರತವು ತನ್ನ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ದೊಡ್ಡ ಹೆಜ್ಜೆಗಳನ್ನಿಡಬೇಕು ಹಾಗೂ ಅದು ಮುಂದಿನ ಕೆಲವು ವರ್ಷಗಳಲ್ಲಿಯೇ ಆಗಬೇಕು.
